ಶನಿವಾರ, ಸೆಪ್ಟೆಂಬರ್ 11, 2021

ಪ್ರೀತಿಸಿದವಳನ್ನು ಮರೆಯುವುದು ಹೇಗೆ?

ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ್ರೀತಿ ಹುಟ್ಟಿದಾಗ ಕಳೆದುಕೊಳ್ಳುವ ಭೀತಿ ಇರುವುದಿಲ್ಲ . ಕಳೆದುಕೊಂಡವರಿಗಷ್ಟೇ ಗೊತ್ತು ಕಳೆದುಕೊಂಡಿದ್ದರ ಬೆಲೆ ಏನು ಎಂದು. ಎಂದೂ ಮರೆಯಲಾಗದ , ಸದಾ ನೆನಪಿನಲ್ಲಿ ಉಳಿಯುವ ಈ ಪ್ರೀತಿಯನ್ನು ಮರೆಯುವುದಾದರೂ ಹೇಗೆ? ಈ ಪ್ರಶ್ನೆಗೆ ಈವರೆಗೂ ಯಾರಿಗೂ ಉತ್ತರ ಸಿಕ್ಕಿರಲಿಕ್ಕಿಲ್ಲ . ನನ್ನ ಪುಸ್ತಕ " ಪ್ರೀತಿಸಿದವಳನ್ನು ಮರೆಯುವುದು ಹೇಗೆ?" ಮುಂದಿನ ವಾರ " MY LANG BOOKS APP" ನಲ್ಲಿ ಬಿಡುಗಡೆಗೊಳ್ಳಲು ತಯಾರಿಯಲ್ಲಿದೆ. ಈ ಪುಸ್ತಕವು ಈ ಬುಕ್ ಮತ್ತು ಆಡಿಯೋ ಪುಸ್ತಕದ ರೂಪದಲ್ಲಿ ಇರುತ್ತದೆ. ನನ್ನ ಪ್ರೀತಿಯ ಸ್ನೇಹಿತರೆಲ್ಲರೂ ದಯಮಾಡಿ " MY LANG BOOKS APP" ಅನ್ನು ಡೌನ್ಲೋಡ್ ಮಾಡಿಕೊಂಡು , ನಾನು ಬರೆದಿರುವ ಈ ಪುಸ್ತಕವನ್ನು ಕೊಂಡು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕಾಗಿ ನನ್ನ ವಿನಂತಿ.

ಮಂಗಳವಾರ, ಆಗಸ್ಟ್ 10, 2021

ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ?

 

ಪ್ರೀತಿ ಎಂದರೇನು ? ಹೃದಯ ಎಂದರೇನು? ಮನಸ್ಸು ಎಂದರೇನು? ಈ ಎಲ್ಲಾ ಪದದ ಅರ್ಥಗಳು ನಮಗೆ ತಿಳಿಯುವುದು ನೋವು ಎಂಬ ಭಾವನೆಯು ಅದರ ಅರ್ಥದ name board ಅನ್ನು ಕೈಯೆಲ್ಲೆ ಹಿಡಿದು ನೇರವಾಗಿ ನಮ್ಮ ಹೃದಯ ಸೇರಿದಾಗ. ನೋವು ಎಂದರೇನು? ನಮ್ಮ ಕೆಲವು ವರ್ಷಗಳವರೆಗೂ ನೋವು ಎಂದರೆ , ಬಿದ್ದಾಗ ಇಲ್ಲ ಯಾರಾದರು ನಮಗೆ ಹೊಡೆದಾಗ ನಮ್ಮ ದೇಹಕ್ಕೆ ಆಗುವ ಪರಿಣಾಮಗಳನ್ನು ನೋವು ಎಂದುಕೊಂಡಿರುತ್ತೇವೆ. ಆದರೆ ನಿಜವಾಗಲೂ ನೋವು ಎಂದರೆ ,ಯಾರಿಗೂ ತೋರಿಸಲಿಕ್ಕೂ ಆಗದೆ , ಹೇಳಲಿಕ್ಕೂ ಆಗದೆ , ಕೊನೆಯ ಪಕ್ಷ ಅಳುವುದಕ್ಕೂ ಆಗದೆ ಮೌನವಾಗಿ ಒಂದೆಡೆ ಕುಳಿತು ಕಷ್ಟ ಪಟ್ಟು ನಗು ಮುಖವನ್ನು ಧರಿಸಲು ಪ್ರಯತ್ನಿಸುವುದು.

ಎಲ್ಲಾ ನೋವುಗಳು ಕೇವಲ ಕ್ಷಣಿಕ ಮಾತ್ರ . ಈ ಬದುಕಿನ ದಾರಿಯುದಕ್ಕೂ ನಮಗೆ ಬರುವ ಹಲವು ನೋವುಗಳು ಬಂದಷ್ಟೇ ವೇಗವಾಗಿ ವಾಪಸ್ಸು ಹೊರಟು ಹೋಗುತ್ತವೆ. ಆದರೆ ಕೆಲವು ನೋವುಗಳು, ನಮ್ಮ ದೇಹದಲ್ಲಿರುವ ಉಸಿರು ನಮ್ಮ ದೇಹವನ್ನು ಬಿಟ್ಟು ಹೋದರು ಈ ನೋವು ಎಂಬ ಎರಡಕ್ಷರದ ಭಾವನೆ ಮಾತ್ರ ಈ ದೇಹವನ್ನು ಬಿಟ್ಟು ಹೋಗುವುದಿಲ್ಲ. ಅಲ್ಲಿಯವರೆಗೂ ನಮ್ಮನ್ನು ಪರಿ ಪರಿಯಾಗಿ ಕಾಡುತ್ತವೆ. ನಮ್ಮ ಬದುಕಿನುದ್ದಕ್ಕೂ ನಮ್ಮನ್ನು ಕಾಡುವ ಕೆಲವು ನೋವುಗಳಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವುದು ಕಳೆದುಕೊಂಡ ಪ್ರೀತಿ.

ಈ ಪ್ರೀತಿಯೆಂಬ ಒಂದು ಸುಂದರವಾದ ಭಾವನೆಯು ಯಾರ ಮನಸ್ಸಿನಲ್ಲಿ ಯಾವಾಗ ಹುಟ್ಟುತ್ತದೆ ಎಂದು ಹೇಳಲಿಕ್ಕೆ ದೇವರಿಗೂ ಸಾಧ್ಯವಾಗಿಲ್ಲ. ಅಂದಮೇಲೆ ನಾವು ಕೇವಲ ಮಾನವರು , ನಮಗೆ ಮಾತ್ರ ಹೇಳಲಿಕ್ಕೆ ಹೇಗೆ ಸಾಧ್ಯ? ಸಾಧ್ಯವಿಲ್ಲ. ಕಳೆದುಕೊಂಡ ಪ್ರೀತಿಯು ಕೊಡುವ ನೋವನ್ನು ತಾಳಲಾಗದೆ ಇದ್ದಾಗ ಪದೇ ಪದೇ ಮನಸ್ಸು ಒಂದು ಪ್ರಶ್ನೆಯನ್ನು ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳುತ್ತಿರುತ್ತದೆ , ಅದೇನೆಂದರೆ " ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ?". ಖಂಡಿತಾ ಅಪರಾಧವೇ , ಬರಬಾರದ ಹೊತ್ತಲ್ಲಿ , ಬರಬಾರದ ರೀತಿಯಲ್ಲಿ ,ಬರಬಾರದ ಪ್ರೀತಿಯು ನಮಗೆ ಅರಿವಿಲ್ಲದಂತೆಯೇ ನಮ್ಮ ಹೃದಯ ಹೊಕ್ಕಾಗ ಅದು ಖಂಡಿತಾ ಅಪರಾಧವೇ. ಬರುವಾಗ ನಮ್ಮ ಮನಸ್ಸಿಗೆ ಒಂದು ಕರೆಯನ್ನೆನಾದರೂ ಮಾಡಿದ್ದಿದ್ದರೆ ಖಂಡಿತಾ ಬರಬೇಡ ನಾನು ತುಂಬಾ ಸಂತೋಷವಾಗಿದ್ದೀನಿ ಎಂದು ಹೇಳಿಬಿಡಬಹುದಿತ್ತು. ಈಗ ಬಂದಿದ್ದು ಆಯಿತು , ನೋವನ್ನು ಕೊಟ್ಟಿದ್ದು ಆಯಿತು. ಇನ್ನೇನಿದ್ದರೂ ತೆಗೆದುಕೊಂಡ ಸಾಲಕ್ಕೆ ಬದುಕಿರುವವರೆಗೂ ಬಡ್ಡಿಯನ್ನು ಕಟ್ಟಲೇಬೇಕು. ಸಾಲ ತೀರಿಸುವ ಮಾತೆ ಇಲ್ಲ. ಇಷ್ಟಪಟ್ಟು ಜೀವನ ನಡೆಸುವುದಕ್ಕೆ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಬಹುದು, ಆದರೆ ನಮಗರಿವಿಲ್ಲದಂತೆಯೇ ಮಾಡಿಕೊಂಡ ಸಾಲಕ್ಕೆ ಬಡ್ಡಿ ಕಟ್ಟುವುದಕ್ಕೆ ಮನಸ್ಸು ಒಪ್ಪುತ್ತದಾ? ಖಂಡಿತಾ ಒಪ್ಪುವುದಿಲ್ಲ. ಒಂದೇ ಒಂದು ಅವಕಾಶ ಸಿಕ್ಕರೆ ಮತ್ತೆ ಹಿಂದೆ ಹೋಗಿ  ಈ ಪ್ರೀತಿ ಎಂಬ ಭಾವನೆಯು ಹೃದಯದಲ್ಲಿ ಹುಟ್ಟುವ ಘಳಿಗೆಯನ್ನು ತಡೆದು ನಿಲ್ಲಿಸಿ ,ಬೇರೆ ಯಾರದಾದರೂ ಖಾಲಿ ಇರುವ ಹೃದಯವನ್ನು ನೋಡಿಕೋ ಎಂದು ಕಪ್ಪಾಳಕ್ಕೆ ಹೊಡೆದು ಕಳಿಸಿಬಿಡಬಹುದ್ದಿತ್ತೇನೋ. ಆದರೆ ಅದು ಸಾಧ್ಯವಿಲ್ಲ. ಆ ದೇವರು ನಮ್ಮನ್ನು ಸೃಷ್ಟಿಸುವಾಗ ಎರಡು ಕೈ, ಎರಡು ಕಾಲು, ಎರಡು ಕಿವಿ, ಎರಡು ಕಿಡ್ನಿ, ಎಲ್ಲಾ ಎರಡೆರಡನ್ನು ಕೊಟ್ಟು ಈ ಹೃದಯವನ್ನು ಮಾತ್ರ ಒಂದೇ ಒಂದು ಕೊಟ್ಟುಬಿಟ್ಟ . ಎರಡು ಹೃದಯಗಳೇನಾದರೂ ಇದ್ದಿದರೆ ,ಈ ನೋವು ತುಂಬಿರುವ ಹೃದಯವನ್ನು ಕಿತ್ತೆಸೆದು ಖಾಲಿ ಇರುವ ಹೃದಯವನ್ನು ಯಾರ ಕಣ್ಣಿಗೂ ಬೀಳದ ಹಾಗೆ ,ಯಾವುದೇ ದೃಷ್ಟಿಯು ತಾಕದ ಹಾಗೆ, ಜೋಪಾನವಾಗಿ ಇಟ್ಟುಕೊಂಡು ನಗು ನಗುತ ಜೀವನ ನಡೆಸಬಹುದಿತ್ತು . ಆದರೆ ಹಾಗಾಗುವುದಿಲ್ಲ. ನಮಗಿರುವುದು ಒಂದೇ ಹೃದಯ. ಎರಡು ಹೃದಯಗಳನ್ನು ಕೊಡದ್ದಿದ್ದಕ್ಕೆ ದೇವರ ಮೇಲೆ ಒಮ್ಮೆ ಮುನಿಸಿಕೊಳ್ಳಬೇಕು ಎಂದನಿಸುತ್ತದೆ.

ಹೃದಯದಲ್ಲಿ ಪ್ರೀತಿ ಹುಟ್ಟಿದ ಮೇಲೆ ಎಷ್ಟೋ ಜನರ ಬದುಕು ಸುಂದರವಾಗಿರುತ್ತದೆ. ಸಿಕ್ಕರಷ್ಟೇ ಸುಂದರವಾಗಿರುತ್ತದೆ. ಇಲ್ಲದ್ದಿದರೆ ಮಟ ಮಟ ಮಧ್ಯಾಹ್ನ ಉರಿವ ಬಿಸಿಲಿನಲ್ಲಿಯೂ ಕತ್ತಲು ಆವರಿಸಿರುತ್ತದೆ. ಈ ಪ್ರೀತಿ ಎಂಬ ಭಾವನೆಯು ಹೇಳದೆ ಕೇಳದೆ ನಮ್ಮ ಹೃದಯದಲ್ಲಿರುವ ಜಾಗವನ್ನು ಒತ್ತುವರಿ ಮಾಡಿ ಆಕ್ರಮಿಸಿಕೊಂಡು ದೊಡ್ಡ ಅರಮನೆಯನ್ನೇ ಕಟ್ಟಿರುತ್ತದೆ . ಅದು ಮಾಡಿರುವ ಅಪರಾಧಕ್ಕೆ ಕೋರ್ಟಿನಲ್ಲಿ ಕೇಸು ಹಾಕೋಣವೆಂದರೆ ಯಾವ ಕೋರ್ಟಿನಲ್ಲಿಯೂ ಈ ಕೇಸು ನಿಲ್ಲುವುದಿಲ್ಲ . ಶಿಕ್ಷೆ ಯಾರಿಗೆ, ನಮಗೆ ತಾನೆ. ಯಾರೋ ಮಾಡಿದ ತಪ್ಪಿಗೆ ನಾವು ಅನುಭವಿಸಲೇ ಬೇಕು ಈ ಶಿಕ್ಷೆ. ಹೋಗುತ್ತಿರುವ ದಾರಿಯೇ ಮರೆತು ಹೋದ ಮೇಲೆ, ನಡು ರಸ್ತೆಯಲ್ಲಿ ಯಾರಾದರು ಸಿಕ್ಕಿ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದರೆ ಏನು ಹೇಳುವುದು . ವಾಪಸ್ಸು ಹೋಗುವ ಪ್ರಶ್ನೆಯೇ ಇಲ್ಲ. ದಾರಿ ಯಾವಾಗಲು ಮುಂದೆ ಇರುತ್ತದೆ ,ಹಿಂದೆ ಇರುವುದಿಲ್ಲ. ನಡೆಯಬೇಕಿರುವುದು ಮುಂದಕ್ಕೆ ,ಹಿಂದಕ್ಕಲ್ಲ. ನಡೆಯುತ್ತಿರುವ ದಾರಿಯು ಮುಗಿಯುವವರೆಗೂ ನಡೆಯಲೇಬೇಕು. ಎದುರಿಗೆ ಸಿಕ್ಕವರಿಗೆ ಉತ್ತರ ಕೊಡಲೇಬೇಕು. ದಾರಿಯಲ್ಲಿ ನಡೆಯುತ್ತಿರುವಾಗ ಮತ್ತದೇ ಉತ್ತರ ಸಿಗದ ಪ್ರಶ್ನೆ ಕಾಡುತ್ತಿರುತ್ತದೆ , ಅದೇನೆಂದರೆ  "  ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ ?".
ಪ್ರೀತಿ ಪಡೆದುಕೊಂಡವರಿಗೆ ಹೃದಯದಲ್ಲಿ ಪ್ರೀತಿ ಹುಟ್ಟೋದು ಎಂದೂ ಅಪರಾಧವಲ್ಲ. ಕಳೆದುಕೊಂಡವರಿಗಷ್ಟೇ ಖಂಡಿತಾ ಹೃದಯದಲ್ಲಿ ಪ್ರೀತಿ ಹುಟ್ಟೋದು ಅಪರಾಧವೇ.

ಅಪರಾಧ ಮಾಡಿರುವುದು ಪ್ರೀತಿಯೆಯಾದರು ಶಿಕ್ಷೆ ಅನುಭವಿಸುತ್ತಿರುವ ನಿರಪರಾಧಿಗಳು ನಾವು.

(ಇದು ಕೇವಲ ಕಾಲ್ಪನಿಕ ಬರಹ ).

ಸೋಮವಾರ, ಆಗಸ್ಟ್ 9, 2021

ಹೆಣ್ಣು...


ಮಗುವಾಗಿ ಹುಟ್ಟಿದ ಕ್ಷಣದಿಂದಲೇ ಶುರುವಾಗುತ್ತದೆ ಈ ಕದನ. ಯಾವ ಮಗು ಹುಟ್ಟುತ್ತದೆ ಗಂಡು ಮಗುವೋ? ಅಥವಾ ಹೆಣ್ಣು ಮಗುವೋ ?. ದೇವರೇ ಮೊದಲನೆಯ ಮಗು ನನಗೆ ಗಂಡಾಗಲಿ ಎಂದು ಪ್ರಾರ್ಥಿಸುವ ಸಾವಿರಾರು ಕೈಗಳು , ಹೆಣ್ಣಾಗದಿರಲಿ ಎಂದು ಪ್ರಾರ್ಥಿಸುವ ಲಕ್ಷಾಂತರ ಕೈಗಳು. ಹುಟ್ಟಿದ ಕ್ಷಣ ಮಾತ್ರದಲ್ಲೇ ಆ ಹೆಣ್ಣು ಮಗು ಯಾರಿಗೂ ಬೇಡವಾಗುತ್ತದೆ. ಈ ಬದುಕು ಎಸೆವ ಸವಾಲುಗಳನ್ನು ಅಂದಿನಿಂದಲೇ ಎದುರಿಸಲು ಸಿದ್ಧವಾಗುತ್ತವೆ. ಒಂದು ಹೆಣ್ಣು ಹುಟ್ಟಿದ ಕ್ಷಣದಿಂದಲೇ ಅದು ಬೇರೆಯವರ ಮನೆಗೆ ಹೋಗುವ ಮಗು ಎಂದು ಆಗಲೇ ನಿರ್ದರಿಸಿಬಿಟ್ಟಿರುತ್ತಾರೆ . ಈ ಹೆಣ್ಣು ಮಕ್ಕಳಿಗೆ ಶಾಪವೆಂದರೆ ಅವರು ಯಾವ ಮನೆಯಲ್ಲಿ ಹುಟ್ಟಿರುತ್ತಾರೋ ಪಾಪ ಆ ಮನೆಯಲ್ಲೇ ಅವರಿಗೆ ಜಾಗ ಇರುವುದಿಲ್ಲ. ಅವರು ಹುಟ್ಟಿದ ಮನೆಯನ್ನು ಮುಂದೊಂದು ದಿನ ಬಿಡಲೇಬೇಕಾಗುತ್ತದೆ. ಈ ಪ್ರಕೃತಿಯಲ್ಲಿ ಸುಂದರವಾಗಿರುವುದೆಲವನ್ನು ಹೆಣ್ಣಿಗೆ ಹೋಲಿಸುತ್ತಾರೆ. ತಂದೆ ತಾಯಿಗೆ ತಕ್ಕ ಮಗಳಾಗಿ ,ಬಂದುವಾಗಿ, ಸ್ನೇಹಿತೆಯಾಗಿ, ಪ್ರೀತಿಯ ಗೆಳೆಯನಿಗೆ ಪ್ರೀತಿಯ ಗೆಳತಿಯಾಗಿ ,ಹೆಂಡತಿಯಾಗಿ ಸೊಸೆಯಾಗಿ, ಮಕ್ಕಳಿಗೆ ಅಮ್ಮನಾಗಿ, ಅತ್ತೆಯಾಗಿ, ಮೊಮೊಕ್ಕಳಿಗೆ ಅಜ್ಜಿಯಾಗಿ,ಸದಾ ಎಲ್ಲರಿಗೂ ಒಳಿತನ್ನು ಬಯಸುವ ಮುಗ್ದ ಮನಸ್ಸಾಗಿ ಬದುಕು ಸವೆದಿರುತ್ತದೆ.
ಪ್ರೀತಿ ,ಕರುಣೆ, ತಾಳ್ಮೆ ,ಸಹನೆ, ನಗು, ಕಣ್ಣೀರು, ನಾಗರ ಹಾವಿನ ಜಡೆ, ಇವೆಲ್ಲದರ ಸಮಾನಾರ್ಥಕ ಪದವೇ ಹೆಣ್ಣು. ಪ್ರತಿಯೊಬ್ಬ ಗಂಡಸಿನ inspiration ,confidence ಎಲ್ಲವೂ ಹೆಣ್ಣು.

ಒಂದು ಹೆಣ್ಣಿನ ಮನಸ್ಸು ಇನ್ನೂ ಮಾತು ಬಾರದ ಪ್ರಶಾಂತವಾದ ಪುಟ್ಟ ಮಗುವಿನ ಹೃದಯವಿದಂತೆ . ಗಂಡು ಹುಟ್ಟಿದರೆ ಹುಟ್ಟಿದ ಮನೆಯನ್ನು ಮಾತ್ರ ಬೆಳಗುತ್ತಾನೆ . ಅದೇ ಒಂದು ಹೆಣ್ಣು ಹುಟ್ಟಿದರೆ, ಹುಟ್ಟಿದ ಮನೆಗೂ ಕೊಟ್ಟ ಮನೆಗೂ , ಎರಡು ಮನೆಯ ಜ್ಯೋತಿಯಾಗಿ ಉರಿಯುತ್ತಾಳೆ. ಅವಳು ಎಲ್ಲೇ ಇದ್ದರು ಹೇಗೆ ಇದ್ದರು ಎಂದಿಗೂ ತನ್ನ ತವರು ಮನೆಯನ್ನು ಮರೆಯುವುದಿಲ್ಲ. ಒಂದು ಹೆಣ್ಣು ನಿಜವಾಗಿಯೂ ಖುಷಿಯಾಗಿದ್ದಾಳೆ ಎಂದರೆ ಅವಳ ತವರು ಮನೆಯು ಸಂತೋಷವಾಗಿದೆ ಎಂದರ್ಥ. ಇದರ ಬೆಲೆ ತಿಳಿಯದೆ, ಹುಟ್ಟಿದಾಗಿನಿಂದಲೇ, ಇನ್ನೊಂದು ಮನೆಯ ಹೆಣ್ಣವಳು ಎಂದು ನಿಂದಿಸುತ್ತಾರೆ ,ನೋಯಿಸುತ್ತಾರೆ . ತುಟಿ ಅಂಚಿನಲ್ಲಿನ ಸಣ್ಣನೆಯ ಮೃದುವಾದ ಮಲ್ಲಿಗೆ ಹೂವಿನ ಪರಿಮಳವ ಬೀರುವ ಸುಂದರವಾದ ನಗುವೊಂದಿದ್ದರೆ ಸಾಕು ಪ್ರಪಂಚವನ್ನೇ ಗೆಲ್ಲುವ ಶಕ್ತಿ ಇರುತ್ತದೆ ಅವಳಿಗೆ. ಯಾರವಳು? ಹೆಣ್ಣಲ್ಲವೇ, ತಾಯಲ್ಲವೇ , ನಮ್ಮ ಬದುಕಿನ ಬೆಳಕಲ್ಲವೇ, ನೋವಲ್ಲವೇ , ನಲಿವಲ್ಲವೇ, ಜೀವನದ ಬಗೆಗೆ ಅರಿತವಳು ಅವಳೇ ಅಲ್ಲವೇ? ಕೊನೆಗೆ ನಮಗೆ ನೆರಳಾಗುವವಳು ಅವಳೇ ಅಲ್ಲವೇ. ಮತ್ತೇಕೆ ಬೇರೆಯವರ ಮನೆಯವಳು ಎಂದು ನಿಂದಿಸುತ್ತೀರಾ ? ಅವಳು ಒಮ್ಮೆ ಆಕಾಶದ ಕಡೆ ಮುಖ ಮಾಡಿ ಸಣ್ಣನೆಯ ಕಿರುನಗೆಯನ್ನು ಮೋಡದೆಡೆಗೆ ಬೀರಿದರೆ ಸಾಕು, ಅದೆಷ್ಟೋ ವರುಷಗಳ ಕಾಲ ಭೂಮಿಯ ಮೇಲೆ ಮುನಿಸಿಕೊಂಡಿದ್ದ ಮೋಡಗಳು ಮಳೆಯಾಗಿ ,ಅವಳ ಸುಂದರವಾದ ಮೊಗವನೊಮ್ಮೆ ನೋಡಲು ಭೂಮಿಗೆ ಬಂದೆ ಬಿಡುತ್ತವೆ. ಹೆಣ್ಣು ಶಕ್ತಿಯೆಲ್ಲವೇ , ಯುಕ್ತಿಯೆಲ್ಲವೇ, ನಮ್ಮ ಬಾಳ ಜ್ಯೋತಿಯನ್ನು ಬೆಳಗುವ ದೀಪವಲ್ಲವೇ. ಹೆಣ್ಣೆಂದರೆ ಹೇಗಿರಬೇಕು? ಸಂಸಾರದ ನೊಗಕ್ಕೆ ಹೆಗಲಾಗಿ, ಕಷ್ಟಗಳನ್ನು ಮೆಟ್ಟಿ ನಿಲ್ಲುವ ದೈರ್ಯಶಾಲಿಯಾಗಿ, ನಾಡಿನ ,ಮನೆಯ ಹೆಮ್ಮೆಯ ಮಗಳಾಗಿರಬೇಕು. ಎಲ್ಲರಿಗೂ ನೋವುಗಳು ಇರುತ್ತವೆ. ಆದರೆ ಅದನ್ನು ತೋರಿಸುವ, ವ್ಯಕ್ತಪಡಿಸುವ ವಿಧಾನಗಳು ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಎಷ್ಟೋ ನೋವುಗಳು ಕಣ್ಣೀರಾಗಿರುತ್ತವೆ. ಆದರೆ ಒಂದು ಹೆಣ್ಣಿನ ನೋವು, ಮೌನವಾಗಿ, ಕಣ್ಣಿನ ನೀರಿನ ಹನಿಗಳನ್ನು ನೆಲಕ್ಕೆ ಚೆಲ್ಲದೆ, ಕಣ್ಣಿನಲ್ಲಿಯೇ ಹಿಡಿದಿಟ್ಟುಕೊಂಡು , ಯಾರಿಗೂ ಕಾಣದ ಹಾಗೆ, ಮರೆಯಲ್ಲಿ ನಿಂತು ಮೆಲ್ಲಗೆ ಕಣ್ಣೀರಾಗಿ, ಗೊತ್ತಿಲ್ಲದವರ ಮುಂದೆ ನಗುವಾಗಿರುತ್ತಾಳೆ.

ಹೆಣ್ಣು ಮಗುವಿನ ಜನನವೆಂದರೆ, ಮಗುವಿನ ತಂದೆ ಮುಖವನ್ನು ಗಂಟುಹಾಕಿಕೊಳ್ಳುವ ಕಾಲವೊಂದಿತ್ತು. ಆದರೆ ಮೂರ್ಖ ತಂದೆಗೆ ಗೊತ್ತಿರುವುದಿಲ್ಲ ಪ್ರತಿಯೊಬ್ಬ ತಂದೆಗೂ ಆಸರೆಯಾಗಿರುವುದು ತನ್ನ ಮಗಳೇ ಎಂದು. ಒಂದು ಕಾಲದಲ್ಲಿ ಪುರುಷರಿಗಷ್ಟೇ ಸೀಮಿತವಾಗಿದ್ದ ಅದೆಷ್ಟೋ ವ್ಯವಹಾರಗಳನ್ನು ಇಂದು ಹೆಣ್ಣು ಸುಲಲಿತವಾಗಿ ನಡೆಸಿಕೊಂಡು ಹೋಗುತ್ತಾಳೆ. ಈ ಆಧುನಿಕ ಸಮಾಜದ ಕೆಲವೊಂದು ಕಡೆ ಗಂಡು ,ಹೆಣ್ಣು ಎಂಬ ಕೆಲವು ಭೇದಗಳನ್ನು ತೊಡೆದು ಹಾಕಿರುವುದನ್ನು ಗಮನಿಸಬಹುದು. ಆದರೆ ಇನ್ನೂ ಕೆಲವೆಡೆ ಗಂಡು ,ಹೆಣ್ಣು ಎಂಬ ಭೇದ ಭಾವವು ಈಗಲೂ ಇರುವುದನ್ನು ಕಾಣಬಹುದು. ಒಂದು ಹೆಣ್ಣು ಕೋಪದಿಂದ ಕಣ್ಣು ಬಿಟ್ಟರೆ ಪ್ರಳಯವಾದರೂ ಆಗಬಹುದು . ಅದೇ ಹೆಣ್ಣು ಪ್ರೀತಿಯಿಂದ ಕಣ್ಣು ಬಿಟ್ಟರೆ ಒಡೆದು ಚೂರು ಚೂರಾಗಿದ್ದ ಹೃದಯವೂ ಕೂಡ ತನ್ನ ಎದೆ ಬಡಿತವನ್ನು  ಮುಂದುವರಿಸುವ ಶಕ್ತಿ ಅದಕ್ಕಿರುತ್ತದೆ. ಎಂತಹ ಕ್ರೂರಿಯ ಮನಸಿನಲ್ಲಿಯೂ ಪ್ರೀತಿಯನ್ನು ಹುಟ್ಟಿಸುವ ಶಕ್ತಿ ಹೆಣ್ಣಿಗಲ್ಲದೆ ಮತ್ಯಾರಿಗಿರುತ್ತದೆ.

ಅವಳೆಂದರೆ ಏನ್ನೇನಲಿ, ಅವಳೇ ಒಂದು ಶಕ್ತಿ . ಅವಳೇ ಆ ಹೆಣ್ಣು.....................

ಗುರುವಾರ, ಆಗಸ್ಟ್ 5, 2021

ಕಾಡಿನ ನಡುವಿನ ರೈಲು ಹಳಿ

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>

ಟ್ಟವಾದ ಕಾಡು ,ಕಾಡಿನ ಮಧ್ಯದಲ್ಲಿ ಎರಡು ರೈಲಿನ ಹಳಿಗಳು. ಎಂದೂ ಸೇರದ ಇಬ್ಬರು ಪ್ರೇಮಿಗಳು ಕೈಗಳನ್ನು ಹಿಡಿಯದೇ ,ದೂರದ ಊರಿಗೆ ಹೊರಟಿರುವಂತಿರುತ್ತದೆ . ಯಾರದೋ ಬರುವಿಕೆಗಾಗಿ ಹೆದರಿ ಅವಿತುಕೊಂಡಿದ್ದವು ಹಕ್ಕಿಗಳು. ರೈಲಿನ ಶಬ್ದಕ್ಕೆ ಹೆದರಿ ಶಬ್ದ ಮಾಡುವುದನ್ನೇ ಬಿಟ್ಟಿದವು. ಎರಡೂ ರೈಲು ಹಳಿಗಳು ಎರಡೂ ಜೀವಗಳಂತೆ. ಒಂದು ಗಂಡು ಜೀವ, ಇನ್ನೊಂದು ಹೆಣ್ಣು ಜೀವ. ಈ ಎರಡೂ ಹಳಿಗಳು ನಿಜವಾಗಿ ಪ್ರೀತಿ ಮಾಡಿ ದೂರವಾದ ಇಬ್ಬರು ಪ್ರೇಮಿಗಳಂತೆ . ಇವೆರಡರ ಮೇಲೆ ಬದುಕೆಂಬ ರೈಲು ಯಾವಾಗಲು ಚಲಿಸುತ್ತಿರುತ್ತದೆ. ಆದರೆ ಪ್ರೇಮಿಗಳೆಂಬ ಈ ಎರಡು ಹಳಿಗಳು ಎಂದಿಗೂ ಸೇರಲಾಗುವುದಿಲ್ಲ . ಆದರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲಿಕ್ಕಾಗುವುದಿಲ್ಲ. ಹಾಗೇನಾದರೂ ಒಂದನ್ನು ಬಿಟ್ಟು ಇನ್ನೊಂದು ಬದುಕಲು ಪ್ರಯತ್ನಿಸಿದರೆ , ಈ ಬದುಕೆಂಬ ರೈಲಿನ ಪಯಣವು ದಾರಿ ತಪ್ಪಿ ಯಮಲೋಕಕ್ಕೆ ನೇರವಾಗಿ ಹೋಗಬೇಕಾಗುತ್ತದೆ . ಜೊತೆಯಲ್ಲೇ ಇದ್ದರು ಇಲ್ಲದಂತೆ ಮೌನವಾಗಿ ಬದುಕೆಂಬ ರೈಲಿನೊಟ್ಟಿಗೆ ಚಲಿಸುವುದೊಂದೇ ದಾರಿ . ಈ ಬದುಕೆಂಬ ರೈಲು ಕೆಲವೊಮ್ಮೆ ರೈಲಿನ ಹಳಿಗಳ ಮೇಲೆ ಎಲ್ಲೆಂದರಲ್ಲಿ ನಿಂತೇ ಹೋಗುತ್ತದೆ. ಕಾರಣಗಳು ಸಾವಿರ ಇರಬಹುದು. ಈ ಎರಡು ಹಳಿಗಳು ನಿಂತುಹೋದ ಬದುಕೆಂಬ ರೈಲಿನ ಭಾರವನ್ನು ತಾಳಲಾರದೆ ಒಬ್ಬರೊನೊಬ್ಬರು ಮಾತನಾಡದೆ ಸಮಾಧಾನಪಡಿಸಿಕೊಂಡು , ಬರಿ ಕಣ್ಣುಗಳ್ಳಲೇ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸುತ್ತ ಈ ಬದುಕು ಇರುವವರೆಗೂ ಕಾಡಿನ ನಡುವಿನ ರೈಲು ಹಳಿಗಳು ಕೊರಗಿ ಕೊರಗಿ ಬದುಕುತ್ತಿರುತ್ತವೆ .


ಬುಧವಾರ, ಆಗಸ್ಟ್ 4, 2021

ಒಂಟಿ ಚಿರತೆ ..

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>


ಒಂದಾನೊಂದು ಕಾಲದಲ್ಲಿ , ತುಮಕೂರು ಜಿಲ್ಲೆ,ಕುಣಿಗಲ್ ತಾಲೂಕಿನ ಒಂದು ಪುಟ್ಟ ಗ್ರಾಮದಲ್ಲಿತ್ತೊಂದು ಒಂಟಿ ಚಿರತೆ . ಬಹುಷಃ ಬದುಕಿದಿದ್ದರೆ ಭಾರತದ ಅಭ್ರಾಹಂ ಲಿಂಕನ್ ಆಗುತ್ತಿದ್ದರೇನೋ . ಹೋಗ ಬಾರದ ಸಮಯದಲ್ಲಿ ಉಸಿರು ಹೊರಟೆ ಹೋಯಿತು . ಜನರ ಪಾಲಿನ ದೇವರು. ದೇವರಾದ ಮೇಲೆ ಜನರೊಟ್ಟಿಗೆ ದೇವರಿಗೆ ಇನ್ನೇನು ಕೆಲಸ. ಪೂಜಿಸಲಿ ,ಆರಾಧಿಸಲಿ ಎಂದು ಎಲ್ಲರನ್ನು ಬಿಟ್ಟೋಗಿರಬೇಕು.

 ಬಹುದಿನಗಳಿಂದ ನನ್ನನು ತೀವ್ರವಾಗಿ ಕಾಡುತ್ತಿದೆ ವ್ಯಕ್ತಿತ್ವವದು. ಗೊತ್ತಿದ್ದರೂ ಇದನ್ನ ದಾಖಲಿಸದ್ದಿದರೆ ತಪ್ಪಾಗಬಹುದೇನೋ .ಇದರ ಬಗ್ಗೆ ಹೇಳಲಿಕ್ಕೆ , ತಿಳಿದುಕೊಳ್ಳುವುದಕ್ಕೆ , ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಾಕಷ್ಟು ವಿಷಯಗಳಿವೆ . ಇದನ್ನು ಒಂದು ಪುಸ್ತಕದ ರೂಪದಲ್ಲಿ ತರಲು ಪ್ರಯತ್ನಿಸುತ್ತಿದ್ದೇನೆ . ಪುಸ್ತಕದ ಕೃಷಿ ಈಗಾಗಲೇ ಪ್ರಾರಂಭವಾಗಿದೆ. 

 ಚಿರತೆಯ ಜಾಡನ್ನು ಹಿಡಿದು ಹಿಂದೆ ಬಿದ್ದಿರುವ ಎಳೆಯ ಕರುವು ನಾನು . ಇದರಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಹುಚ್ಚುತನದ ಹಠ ನನಗೆ. ಇಲ್ಲಿ ಎಲ್ಲವೂ ಇದೆ. ದಶಕಗಳ ಹಿಂದೆ ಹಳ್ಳಿ ರಾಜಕೀಯದ ಮೇಲಾಟದಲ್ಲಿ ಗೆದ್ದವರಾರು ,ಉಳಿದವರಾರು ,ಹೋದವರಾರು. ಹೋದವರು ಸುಮ್ಮನೆ ಹೋದರ . ದಶಕಗಳ ಹಿಂದೆ ಇಟ್ಟ ಪ್ರತಿಯೊಂದು ಹೆಜ್ಜೆ ಗುರುತುಗಳು ಇನ್ನೂ ಅಳಿಸಿಲ್ಲ. ಸೋತು ಗೆದ್ದವರ ಕಥೆ.

 ಚಿರತೆಯ ಬೇಟೆ ಬಲು ರೋಚಕವಾಗಿರುತ್ತದೆ . ಕಾದು ನೋಡಿರಿ ...............................

ಮಂಗಳವಾರ, ಆಗಸ್ಟ್ 3, 2021

ಕಾರಣವಿಲ್ಲದ ಬದುಕು...

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>
" ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ", ಎಲ್ಲೋ ಕೇಳಿದ ಸಾಲುಗಳು ಪದೇ ಪದೇ ನೆನಪಾಗುತ್ತವೆ. ಕಳೆದುಹೋದ ದಿನಗಳಲ್ಲಿ ನನಸಾಗದ ಕನಸುಗಳನ್ನು ನೆನೆಯುತ್ತ ಸಮಯ ಕಳೆಯುವುದೇ ಬದುಕಾ ?. ಮುಂದೆ ಬರಲಿರುವ ದಿನಗಳನ್ನು ಬರಲಿ ಎಂದು ಕಾಯುತ್ತ ಕೂರುವುದೇ ಬದುಕಾ ?. ಇಲ್ಲಾ ಎಲ್ಲವನ್ನು ಮರೆತು ? ಮರೆಯಲಾಗದಿದ್ದಾಗ , ಮರೆತಂತೆ ನಟಿಸಿ ,ಮುಖದ ಮೇಲೆ ಒಂದು ಸಣ್ಣನೆಯ ಕಿರುನಗೆಯನ್ನು ಇಟ್ಟುಕೊಂಡು ,ಎಲ್ಲ ಮರೆತ್ತಿದ್ದೇನೆ ಎಂದು ಇರುವುದೇ ಬದುಕಾ?. ಈ ಬದುಕಿಗೆ ಯಾವ ಕಾರಣಗಳು ಇಲ್ಲ. ಕಾರಣಗಳು ಇದ್ದರು ಯಾವುದು ಶಾಶ್ವತವಲ್ಲ . "ಎಲ್ಲಿಯವರೆಗೆ ? ಈ ಹೃದಯದ ಬಡಿತ ನಿಲ್ಲುವವರೆಗೆ ". ಯಾರನ್ನಾದರೂ ಒಮ್ಮೆ ಕೇಳಿ ನೋಡಿರಿ "ಚೆನ್ನಾಗಿದ್ದೀರ"ಎಂದು. ಸುಖವಾಗಿದೀನಿ , ತುಂಬಾ ಸಂತೋಷವಾಗಿದೀನಿ ಎಂಬಿತ್ಯಾದಿ ಪದಗಳು ಯಾರ dictionary ಯಲ್ಲಿಯೂ ಇರುವುದಿಲ್ಲ. ಮನುಷ್ಯ ಎಂಬ ಪ್ರಾಣಿಗೆ ಯಾವುದರಲ್ಲೂ ಸುಖವಿರುವುದಿಲ್ಲ , ಎಲ್ಲವೂ ಸಿಕ್ಕ ಮೇಲೂ ಇನ್ನೂ ಏನೋ ಬೇಕು ಎಂದು ಮನಸ್ಸು, ದೇಹಗಳೆರಡೂ ಒಟ್ಟಿಗೆ meeting ಮಾಡಿ ನಿರ್ಧಾರಕ್ಕೆ ಬಂದು ಬಿಟ್ಟಿರುತ್ತವೆ. ಯಾರ ಬದುಕಿಗು ನಿರ್ದಿಷ್ಟ ಕಾರಣವಿರುವುದಿಲ್ಲ. ಎಲ್ಲರ ಬದುಕಿನಲ್ಲಿಯೂ ಮುಂದೆ ಏನು ? ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದು ಕಣ್ಣ ಮುಚ್ಚಿದೊಡನೆ ಕಣ್ಣ ಮುಂದೆ ಬಂದು ರಾತ್ರಿಯೆಲ್ಲಾ ಜಾಗರಣೆ ಮಾಡಿಸುತ್ತದೆ.

ಪಡೆದುಕೊಂಡವರು ಅಂಥ ಯಾರು ಇಲ್ಲ. ಒಂದು ರೀತಿಯಲ್ಲಿ ಎಲ್ಲರು ಕಳೆದುಕೊಂಡವರೇ . ಕಳೆದುಕೊಂಡ ಪ್ರೀತಿ , ಸ್ನೇಹ, ಬಾಲ್ಯ ,ದುಡ್ಡು,ಸಂಬಂಧ ,ಕೈ, ಕಾಲು , ಕಿಡ್ನಿ , ಮರೆತೇನೆಂದರು ಮತ್ತೆ ನೆನಪಾಗುವ ಹಳೆಯ ಸುಮಧುರವಾದ ಕ್ಷಣಗಳು, ಕಳೆದುಹೋದ ಮನಸು.

ನಾವು ಕಳೆದುಕೊಂಡವರು , ಬದುಕಿಗೆ ಕಾರಣ ಹುಡುಕುತ್ತಿರುವವರು. ಕಾರಣ ಸಿಕ್ಕವರಷ್ಟೇ ಅದೃಷ್ಟವಂತರು . ಇಲ್ಲದಿದ್ದರೆ ನಡು ರಸ್ತೆಯಲ್ಲಿ  ,ಉರಿ ಬಿಸಿಲಿನಲ್ಲಿ, BMTC ಬಸ್ಸಿನಲ್ಲಿ , ಕೂರಲು ಸೀಟೂ ಇಲ್ಲದೆ , ಅದೆಷ್ಟೋ ಸೆಕೆಂಡುಗಳ , ಟ್ರಾಫಿಕ್ ಜಾಮಿನಲ್ಲಿ ಸಿಕ್ಕಂತಾಗುತ್ತದೆ ನಮ್ಮ ಈ ಬದುಕು. ಬಸ್ಸಿನಿಂದ ಇಳಿಯುವ ಹಾಗು ಇಲ್ಲ .ಅದರೊಳಗೆ ನಿಲ್ಲುವ ಹಾಗು ಇಲ್ಲ. ಬೇರೆ ದಾರಿ ಕಾಣದೆ , ಇಷ್ಟವಿಲ್ಲದಿದ್ದರು ಅನಿವಾರ್ಯೆತೆಗೆ  ನಿಲ್ಲಲೇಬೇಕಾಗುತ್ತದೆ.
ಬದುಕಿಗೊಂದು ಅರ್ಥ ಹುಡುಕೋಣ , ಅರ್ಥಕೊಂದು ಉದ್ದೇಶ , ಉದ್ದೇಶದೆಡೆಗೆ ಮುಂದಿನ ಎಲ್ಲಾ ಹೆಜ್ಜೆಗಳನ್ನುಇಟ್ಟರಷ್ಟೇ ಬದುಕು.

ಕಾರಣವಿಲ್ಲದ ಬದುಕಿನೆಡೆಗೆ ಕಾರಣ ಹುಡುಕ ಹೊರಟ ಬದುಕೇ ನಿಜವಾದ ಬದುಕು.

ಸೋಮವಾರ, ಆಗಸ್ಟ್ 2, 2021

ಬೆಳಕು

 <script async src="https://pagead2.googlesyndication.com/pagead/js/adsbygoogle.js?client=ca-pub-2186354125220280"

     crossorigin="anonymous"></script>
ಕಾಡು, ಮೇಡು ಪ್ರದೇಶದಲ್ಲಿ, ವಿದ್ಯುತ್ ಸಂಪರ್ಕವೇ ಇಲ್ಲದ ಒಂದು ಪುಟ್ಟ ಹಳ್ಳಿಯಲ್ಲಿ ,ಅಮವಾಸ್ಯೆಯ ಕತ್ತಲೆಯಲ್ಲಿ, ತೋಟದ ಮನೆಯ ಚಾವಣಿಯ ಮೇಲೊಂದು ದೀಪ. ದೀಪದಿಂದ ಪ್ರಜ್ವಲಿಸುತ್ತಲಿತ್ತೊಂದು ಬೆಳಕು. ಆ ಬೆಳಕಿಗೆ ಎಷ್ಟೊಂದು ಮಹಾತ್ವವಲ್ಲವೇ ? ನಮೆಲ್ಲರ ಮನೆಯಲ್ಲಿ ಒಳ್ಳೆಯ ಟುಬೆಲೈಟ್ ಗಳಿಂದ ನಮ್ಮ ಮನೆಯು ಬೆಳಕಿನಿಂದ ತುಂಬಿರುತ್ತದೆ . ಬೀದಿ ದೀಪಗಳು ಹೆಜ್ಜೆ ಹೆಜ್ಜೆಗೂ ನಾ ಮುಂದು ತಾ ಮುಂದು ಎಂದು ಕಾಂಪಿಟಿಷನ್ ಗೆ ಇಳಿದು ಇಡೀ ಬೀದಿಯನ್ನುಮುಂಜಾನೆಯವರೆಗೂ ಬೆಳಗುತ್ತಿರುತ್ತವೆ . ಆದರೂ ನಮ್ಮ ಬದುಕಿನಲ್ಲಿ ಬರಿ ಕತ್ತಲೆಯೇ ತುಂಬಿರುತ್ತದೆ. ಬರಿ ಕತ್ತಲೆಯೇ ತುಂಬಿರುವ ಈ ಬದುಕಿಗೆ ಎಷ್ಟೇ ದೊಡ್ಡ ಟುಬೆಲೈಟ್ ನ ಬೆಳಕು  ಕೂಡ ಬರಿ ಕತ್ತಲೆಯೇ.  ಬೆಳಕಿನಡಿಯಲ್ಲಿಯೇ ನಿಂತು ಈ ಬರಡಾದ ಬದುಕಿಗೆ ಬೆಳಕು ಯಾವಾಗ ಬರುತ್ತದೆ ಎಂದು ಯೋಚಿಸುತ್ತಿರುತ್ತೇವೆ .ಈ ಬಾಳ ಪಯಣದಲ್ಲಿ ಬಿಡಿಸಿಕೊಳ್ಳಲಾಗದ ಬಂದಗಳು ಅದೆಷ್ಟೋ, ಹೊರಲಾಗದ ದುಃಖದ ಹೊರೆಯ ಭಾರದ ತೂಕವೆಷ್ಟೋ. ಏನೋ ನೆನಪಾದಾಗ ಕಣ್ಣುಗಳು ಯಾರನ್ನು ಕೇಳದೆ ತುಂಬಿಕೊಂಡು ಬಂದಾಗ , ಕಣ್ಣಿನ ಹನಿಗಳು ಕೆನ್ನೆಯನ್ನು ಸ್ಪರ್ಶಿಸಿ ಕಚಗುಳಿಯಿಡುತ ಅಳಿಸುತ್ತಿರುವಾಗ ಯಾವ ದೊಡ್ಡ ಬೆಳಕು ಕೂಡ ಏನು ಮಾಡಲು ಸಾಧ್ಯ. ಬರಿ ಕತ್ತಲೆಯೇ ತುಂಬಿರುವ ಈ ಅಮಾವಾಸ್ಯೆಯ ಬದುಕಿನಲ್ಲಿ ಬೆಳದಿಂಗಳ ಚಂದಿರನ ಪ್ರವೇಶಕ್ಕೆ ಅನುಮತಿಯನ್ನೇನಾದರೂ ಪಡೆಯಬೇಕಾ? ಕಾದಿರುವೆ ನಿನಗಾಗಿ ನೀ ಎಂದಾದರೂ ಒಮ್ಮೆ ಬಂದೆ ಬರುತ್ತೀಯ ,ಬರಿ ಕತ್ತಲೆಯೇ ತುಂಬಿರುವ ಈ ಬದುಕಿನಲ್ಲಿ ಬೆಳಕು ತಂದೆ ತರುತ್ತೀಯ ಎಂಬ ನಂಬಿಕೆಯಿಂದ.

ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮ ಪಯಣ .................... 

ಪ್ರೀತಿಸಿದವಳನ್ನು ಮರೆಯುವುದು ಹೇಗೆ?

ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ...